ಹರಿಮೋನಿಯಂ ರೀಟ್ಸ್ ಲಾಂಛನದಲ್ಲಿ ಎಸ್.ಟಿ.ಪಾಲ್ರಾಜ್ ಅವರು ನಿರ್ಮಿಸಿರುವ ಹಾಗೂ ರವಿವರ್ಮ ನಿರ್ದೇಶನದ ‘ಜೈ ಭಜರಂಗ ಬಲಿ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
‘ಸಂಗಮ ಚಿತ್ರದ ನಂತರ ರವಿವರ್ಮ ಅವರು ನಿರ್ದೇಶಿಸಿರುವ ಈ ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತ ನೀಡಿದ್ದಾರೆ. ಎ.ವೆಂಕಟೇಶ್ ಅವರ ಛಾಯಾಗ್ರಹಣ, ಗಣೇಶ್ ಸಂಕಲನ, ಇಮ್ರಾನ್, ಕಲೈ ನೃತ್ಯ ನಿರ್ದೇಶನ ರವಿವರ್ಮ, ಡಿಫ಼ರೆಂಟ್ಡ್ಯಾನಿ ಸಾಹಸ ನಿರ್ದೇಶನ ಹಾಗೂ ಮೋಹನ್ಬಿ.ಕೆರೆ ಕಲಾ ನಿರ್ದೇಶನವಿರುವ ಈ ಚಿತ್ರದ ಹಾಡುಗಳನ್ನು ಯೋಗರಾಜ್ಭಟ್ ಬರೆದರೆ ಸಂಭಾಷಣೆಯನ್ನು ವಿನಾಯಕರಾಮ ಕಲಗಾರು ಬರೆದಿದ್ದಾರೆ. ರಾಮಯ್ಯ ಗುಬ್ಬಿ ಈ ಚಿತ್ರದ ಸಹ ನಿರ್ಮಾಪಕರು.
ಅಜಯ್ರಾವ್, ಸಿಂಧೂಲೋಕನಾಥ್, ಅನಂತನಾಗ್, ರವಿಶಂಕರ್, ಶೋಭ್ರಾಜ್, ಆದಿಲೋಕೇಶ್, ಬುಲೆಟ್ಪ್ರಕಾಶ್, ಮಿತ್ರ, ಅರುಣ್ಸಾಗರ್, ಶ್ರುತಿನಾಯ್ಡು, ಟೆನ್ನಿಸ್ಕೃಷ್ಣ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.